Belagavai: ಪತ್ನಿಯನ್ನ ಕೊಂದು ಬೆಡ್ ಕೆಳಗೆ ಶವ ಅಡಗಿಸಿಟ್ಟು ಪತಿ ಪರಾರಿ..

ಪತ್ನಿಯನ್ನ ಬರ್ಬರವಾಗಿ ಕೊಲೆಗೈದು, ಶವವನ್ನು ಮಂಚದ ಕೆಳಗೆ ಬಚ್ಚಿಟ್ಟು ಪತಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಆಕಾಶ್ ಕಂಬಾರ್ ಕೊಲೆ ಮಾಡಿ ಪರಾರಿಯಾದ ಆರೋಪಿ. ಸಾಕ್ಷಿ ಕಂಬಾರ್(20) ಕೊಲೆಯಾದ ದುರ್ದೈವಿ. ಕಳೆದ ನಾಲ್ಕು ತಿಂಗಳ ಹಿಂದೆ ಆಕಾಶ್ ಕಂಬಾರ ಹಾಗು ಕೊಲೆಯಾದ ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೂರು ದಿನಗಳ ಪತಿ ಆಕಾಶ್ ಕಂಬಾರ ಪತ್ನಿ ಸಾಕ್ಷಿಯನ್ನು ಕೊಂದು, ಶವವನ್ನು ಮಂಚದೊಳಗೆ ಅಡಗಿಸಿಟ್ಟಿದ್ದಾನೆ. ತದನಂತರ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಡಿವೈಎಸ್​ಪಿ ಹಾಗು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಮೃತ  ಸಾಕ್ಷಿ ಕುಟುಂಬಸ್ಥರು ವರದಕ್ಷಿಣೆ ಅರೋಪ ಮಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Rakesh arundi

Leave a Reply

Your email address will not be published. Required fields are marked *