ಪಂದ್ಯ ನಡೆಯುತ್ತಿದ್ದ ವೇಳೆಯೇ ತಂದೆ ನಿಧನ: ಡುನಿತ್ ವೆಲ್ಲಾಲಗೆ ಅಘಾತ
ಶ್ರೀಲಂಕಾದ ಆಲ್ರೌಂಡರ್ ಡುನಿತ್ ವೆಲ್ಲಾಲಗೆ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಡೆಯುತ್ತಿದ್ದ ವೇಳೆಯೇ ಅವರ ತಂದೆ ನಿಧನರಾಗಿದ್ದಾರೆ. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತವಾಯಿತು.
ಅಫ್ಘಾನಿಸ್ತಾನ ವಿರುದ್ಧದ ಕೊನೆ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದ್ದ 22 ವರ್ಷದ ಯುವ ಸ್ಪಿನ್ನರ್, ತಮ್ಮ ಕೊನೆ ಓವರ್ನಲ್ಲಿ ಐದು ಸತತ ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದರಿಂದ ನಿರಾಸೆಗೊಂಡಿದ್ದ ದುನಿತ್ ವೆಲ್ಲಾಲಗೆ ಪಂದ್ಯದ ನಂತರ ತಂದೆಯ ಹಠಾತ್ ಸಾವಿನ ಸುದ್ದಿಯ ಅಘಾತ ಕಾದಿತ್ತು.
ತಂಡದ ಮ್ಯಾನೇಜರ್ ಹಾಗೂ ಕೋಚ್ ಸನತ್ ಜಯಸೂರ್ಯ ಅಘಾತಕಾರಿ ವಿಷಯವನ್ನು ದುನಿತ್ ವೆಲ್ಲಾಲಗೆ ತಿಳಿಸಿದ್ದಾರೆ. ದುಃಖಿತರಾದ ವೆಲ್ಲಲ್ಲಾಗೆ ಸಹ ಆಟಗಾರರು ಸಮಾಧಾನ ಪಡಿಸಿದ್ದಾರೆ. ವೆಲ್ಲಲ್ಲಾ ತಂದೆ ಹೃದಯಾಘಾತದಿಂದ ಮ್ಯಾಚ್ ನೋಡುತ್ತಲೇ ಮೃತಪಟ್ಟಿದ್ದಾರೆ.
ಕಳೆದ ತಿಂಗಳು ಕೊಲಂಬೊದಲ್ಲಿ ವೃತ್ತಿಜೀವನದ ಅತ್ಯುತ್ತಮ 5/27 ಸೇರಿದಂತೆ ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ, ವೆಲ್ಲಾಲ ಶ್ರೀಲಂಕಾ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದರೆ ಗುರುವಾರದ ಪಂದ್ಯ ಇವರಿಗೆ ಶಾಶ್ವತವಾಗಿ ಕಹಿ ಅನುಭವ ನೀಡಿದೆ. ಸದ್ಯಕ್ಕೆ, ಈ ಕಷ್ಟದ ಸಮಯದಲ್ಲಿ ಡುನಿತ್ ವೆಲ್ಲಾಲಗೆ ಮತ್ತು ಅವರ ಕುಟುಂಬಕ್ಕೆ ಕ್ರಿಕೆಟ್ ಜಗತ್ತು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.